ದಿನಾಂಕ 15.08.2023 ಮಂಗಳವಾರದಂದು ಜೆಡಿಎಸ್ ಕ್ಷೇತ್ರ ಕಚೇರಿ ಕೊಪ್ಪ,ಬಾಳಗಡಿಯಲ್ಲಿ "ಅಮ್ಮ ಫೌಂಡೇಶನ್" ವತಿಯಿಂದ ಸಿಜು ಎನ್ ಆರ್ ಪುರ ಇವರ
Read More+91 9343299998
ತುಮಖಾನೆ, ಕೊಪ್ಪ ತಾಲ್ಲೂಕು, ಚಿಕ್ಕಮಗಳೂರು – 577120
info@ammafoundation.com
Director of Manufacturing facilities company
Tonnes CO2 emissions
avoided
Domestic households
served each year
Acres of land protected
by solar parks
'ಮಾತೃದೇವೋಭವ-ತಾಯಿಯೇ ದೇವರು' ಎಂಬ ನಾಣ್ಣುಡಿಯಂತೆ ಒಬ್ಬ ಮನುಷ್ಯ ಸಂಸ್ಕಾರವಂತನಾಗಿ ಜಿಳೆಯುವಲ್ಲಿ ತಾಯಿಯ ಪಾತ್ರ ಬಹಳ ಮಹತ್ವದ್ದು. ತಾಯಿಯಲ್ಲಿಯೇ ದೇವರನ್ನು ಕಂಡ ನಮ್ಮ ಸಂಸ್ಥಾಪಕ ಅಧ್ಯಕ್ಷರಾದ ಕೊಡುಗೈ ದಾನಿ, ಸಾವಿರಾರು ಜನರ ಪ್ರೇರಕ ಶಕ್ತಿ ಶ್ರೀಯುತ ಸುಧಾಕರ ಎಸ್ ಶೆಟ್ಟಿಯವರ ಪ್ರೇರಕ ಶಕ್ತಿ, ಅವರ ಪೂಜ್ಯ ಮಾತೃತ್ರೀಯವರಾದ ಶ್ರೀಮತಿ ಶಾರದಮ್ಮ ಮಮತಾಮಯಿ ಮಾತೆ, ವಾತ್ಸಲ್ಯದ ಮೂರ್ತಿ, ಸಾಧನೆಗೆ ಸ್ಫೂರ್ತಿ, “ಜನಸೇವೆಯೇ ಜನಾರ್ದನ ಸೇವೆ ಕಂದ” ಎಂದು ಹಾಡುತ್ತಾ ಮಕ್ಕಳನ್ನು ಬೆಳೆಸಿದವರು ಇವರು. ಈ ಎಲ್ಲಾ ಗುಣಗಳನ್ನು ತನ್ನ ತಂದೆ ಮತ್ತು ತಾಯಿಯಿಂದ ಎರವಲಾಗಿ ಹಡೆದು ಬೆಳೆದ ಸುಧಾಕರ ಎಸ್ ಶೆಟ್ಟಿ ಅವರು ತಮ್ಮ ತಂದೆ-ತಾಯಿಯ ಎಲ್ಲಾ ಸೇವಾ ಕಾರ್ಯಗಳು ಅವಿರತವಾಗಿ ನಡೆಯುತ್ತಿರಲಿ ಎಂಬ ಮಹತ್ತರ ಉದ್ದೇಶ ಇರಿಸಿಕೊಂಡು ಸ್ಥಾಪಿಸಿದ್ದೇ ಈ ನಮ್ಮ “ಅಮ್ಮ ಫೌಂಡೇಶನ್".
ನಾನು ತಮ್ಮೆಲ್ಲರ ಪ್ರೀತಿಯ ಸುಧಾಕರ ಎಸ್.ಶೆಟ್ಟಿ ಶೃಂಗೇರಿ ಕ್ಷೇತ್ರದ ಕೊಪ್ಪ ತಾಲೂಕಿನ ಶಾನುವಳ್ಳಿ ಗ್ರಾಮದಲ್ಲಿನ ತುಮಖಾನೆ ನನ್ನ ಜನ್ಮ ಭೂಮಿ. ಶ್ರೀಯುತ ಸಂಜೀವ ಶೆಟ್ಟಿ ಹಾಗೂ ಶ್ರೀಮತಿ ಶಾರದಮ್ಮ ನನ್ನ ಹೆತ್ತವರು. ಜಮೀನುದಾರರ ಕುಟುಂಬದಲ್ಲಿ ಹುಟ್ಟಿದ್ದರೂ ವಿಧಿನಿಯಮದಂತೆ ಬೆಂಗಳೂರಿನಲ್ಲಿ ಬಾಲ್ಯದಿಂದಲೇ ಹೋಟೆಲ್ ಕಾರ್ಮಿಕನಾಗಿ ದುಡಿಮೆ ಪ್ರಾರಂಭಿಸಿದೆ. ನನ್ನ ಹದಿನೆಂಟನೆಯ ವಯಸ್ಸಿನಲ್ಲೆ (1976) ಸ್ವಂತ ಹೋಟೆಲ್ ಮಾಲೀಕನಾದ ನಾನು ನಮ್ಮ ನಾಡಿನ ಸಾಂಸ್ಕೃತಿಕ ರಾಜಧಾನಿ ಮೈಸೂರನ್ನು ನನ್ನ ಕರ್ಮಭೂಮಿಯಾಗಿಸಿಕೊಂಡು, ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುವ ಹಲವು ಉದ್ಯಮಗಳನ್ನು ಸ್ಥಾಪಿಸಿ, ಯಶಸ್ವಿ ಉದ್ಯಮಿಯಾಗಿ ಬೆಳೆದು, ಈಗ ಜನಸೇವೆ ಮಾಡುವ ಮಹತ್ತರ ಉದ್ದೇಶವನ್ನಿರಿಸಿ ಕೊಂಡು ಪುನ: ನನ್ನ ಹೆತ್ತೂರಿಗೆ ಮರಳಿದ್ದೇನೆ.
ತಾಯಿಯೇ ದೇವರು ಎಂದು ಪೂಜಿಸುವ ನೆಲೆ ನಮ್ಮದು. ಜನ್ಮ ನೀಡುವುದು ಮಾತ್ರವಲ್ಲ, ಜನ್ಮ ಸಾರ್ಥಕವನ್ನು ಪಡೆಯಲು ಬೇಕಿರುವ ಸಂಸ್ಕಾರವನ್ನು ನೀಡುವುದೂ ತಾಯಿಯೇ. ತಾಯಿಯಾದವಳು ತನ್ನ ಮಕ್ಕಳನ್ನು ನಿಸ್ವಾರ್ಥಿಯಾಗಿ, ಸಮಾಜಮುಖಿಯಾಗಿ ರೂಪಿಸಿದರೆ ಪ್ರತೀ ಸಮಾಜದಲ್ಲೂ ಅವರು ಶಕ್ತಿಯಾಗಿ ನಿಲ್ಲಬಲ್ಲರು ಎನ್ನುವುದಕ್ಕೆ
ಶ್ರೀಮತಿ. ಶಾರದಮ್ಮನವರು ತಮ್ಮ ಮಕ್ಕಳನ್ನು ಬೆಳೆಸಿರುವ ರೀತಿಯು ಎಲ್ಲರಿಗೂ ಮಾದರಿಯಾಗಿದೆ.
ಜ್ಞಾನ ಸರೋವರ
ಅನ್ನಬ್ರಹ್ಮ
ನೊಂದವರ ಬಂಧು
ಎಲೆ ಮರೆಯ ಕಾಯಿಗಳಿಗೆ ಸ್ಪೂರ್ತಿ
ಶ್ರೀ ಮಂತಿಕೆ, ಹಣ, ಅಧಿಕಾರ, ಅಂತಸ್ತು ಎಲ್ಲರಿಗೂ ಬರಬಹುದು. ಆದರೆ ಅದನ್ನು ಸಮಾಜದ ಒಳಿತಿಗಾಗಿ ಬಳಸುವ ಮನಸ್ಸು ಮಾತ್ರ ಕೆಲವರಿಗೆ ಬರುತ್ತದೆ.ಸ. ಸಧಾಕರ ಶೆಟ್ರು ರಾಜಕೀಯವನ್ನು ಮೈಸೂರಿನಲ್ಲಿಯೇ ಮಾಡಬಹುದಿತ್ತು. ಆದರೆ ತನ್ನ ಹುಟ್ಟೂರಿನ ಬಗ್ಗೆ ಇರುವ ಅಪಾರವಾದ ಪ್ರೀತಿಯಿಂದ ತನ್ನ ತವರಿನ ಕ್ಷೇತ್ರದಲ್ಲಿರುವ ಬಡವರಿಗೆ, ನಿರ್ಗತಿಕರಿಗೆ ತಮ್ಮ ತಾಯಿಯವರ ನೆನಪಿನಲ್ಲಿ ಸ್ಥಾಪಿತವಾಗಿರುವ ಅಮ್ಮ ಫೌಂಡೇಶನ್ ಮುಖಾಂತರ ಸಹಾಯ ಹಸ್ತ ಚಾಚಿರುವ ಕಾರ್ಯ ಶ್ಲಾಘನೀಯ ಮತ್ತು ಅನುಕರಣೀಯ.
ಕೊಪ್ಪ ತಾಲೂಕಿನ ಶಾನುವಳ್ಳಿ ಪಂಚಾಯಿತಿಯ ತುಮಖಾನೆ ಊರಿನವರಾದ ಶ್ರೀಯುತ ಸುಧಾಕರ ಶೆಟ್ಟಿಯವರು ಮೂಲತಃ ಕೃಷಿಕರಾಗಿದ್ದು, ನಂತರ ಉದ್ಯಮದಲ್ಲಿ ತೊಡಗಿಸಿಕೊಂಡು ಯಶಸ್ವಿ ಉದ್ಯಮಿಯಾಗಿ ಬೆಳೆದವರು. ಮಹತ್ತರವಾದದ್ದನ್ನು ಸಾಧಿಸಬೇಕೆಂಬ ಛಲದಿಂದ ಈ ರಾಜ್ಯದಲ್ಲಿ ಅಂತರ ರಾಷ್ಟ್ರೀಯ ಮಟ್ಟದ ಶಿಕ್ಷಣ ಸಂಸ್ಥೆಯ ಜೊತೆಗೆ ಹಲವಾರು ಉದ್ಯಮಗಳನ್ನು ಸ್ಥಾಪಿಸಿ ಕರ್ನಾಟಕ ರಾಜ್ಯದ ಅಸಂಖ್ಯಾತ ಯುವಕ ಯುವತಿಯರಿಗೆ ಉದ್ಯೋಗವನ್ನು ಕಲ್ಪಿಸಿ ಕೊಟ್ಟಿದ್ದಾರೆ. ಪ್ರಸ್ತುತ ರಾಜ್ಯದ ಅಗ್ರಗಣ್ಯ ಉದ್ಯಮಿಗಳಲ್ಲೊಬ್ಬರಾಗಿದ್ದಾರೆ.
ದಿನಾಂಕ 15.08.2023 ಮಂಗಳವಾರದಂದು ಜೆಡಿಎಸ್ ಕ್ಷೇತ್ರ ಕಚೇರಿ ಕೊಪ್ಪ,ಬಾಳಗಡಿಯಲ್ಲಿ "ಅಮ್ಮ ಫೌಂಡೇಶನ್" ವತಿಯಿಂದ ಸಿಜು ಎನ್ ಆರ್ ಪುರ ಇವರ
Read More